ಕರ್ನಾಟಕ ಸರ್ಕಾರದ ಇತಿಹಾಸದಲ್ಲಿ ಶ್ರೀ ಡಿ.ದೇವರಾಜ ಅರಸು ಅವರ ಅವಧಿಯು ಹಲವಾರು ಕ್ರಾಂತಿಕಾರಕ ಹೆಜ್ಜೆಗಳಿಗೆ ಸಾಕ್ಷಿಯಾಯಿತು. ಮಲಬಾಚುವ ಪದ್ಧತಿ ನಿಷೇಧ, ಉಳುವವರನ್ನೇ ಹೊಲದೊಡೆಯರನ್ನಾಗಿಸಿದ ಭೂ ಸುಧಾರಣಾ ಕಾಯ್ದೆ, ಪೌರಕಾರ್ಮಿಕರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಐ.ಪಿ.ಡಿ. ಸಾಲಪ್ಪ ನೇತ್ರತ್ವದಲ್ಲಿ ಸಮಿತಿ ರಚನೆ, ಎಲ್.ಜಿ.ಹಾವನೂರ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಅಧ್ಯಯನ ಹೀಗೆ ಹಲವಾರು ಕಾರ್ಯಗಳ ಮೂಲಕ ಕರ್ನಾಟಕದ ದಲಿತರ ಮತ್ತು ಹಿಂದುಳಿದವರ ಏಳಿಗೆಗೆ ಕ್ರಾಂತಿಕಾರಕ ಹೆಜ್ಜೆಗಳನ್ನು ಕರ್ನಾಟಕದ ಇತಿಹಾಸದಲ್ಲಿ ಮೂಡಿಸಿದ್ದಾರೆ.
