‘ಮೆಹ್ತರ್ ಮಹಲ್’ ಎಂದರೆ ‘ಗುಡಿಸುವವನ ಅರಮನೆ’ಯನ್ನು ಕ್ರಿ.ಶ. ೧೬೨೦ರಲ್ಲಿ ಕಟ್ಟಲಾಯಿತು. ಮೆಹ್ತರ್ ಮಸೀದಿಗೆ ದ್ವಾರವಾಗಿರುವ ಈ ಮೂರು ಅಂತಸ್ತಿನ ಸುಂದರ ಕಟ್ಟಡವು ಸರಸೆನಿಕ್ ಶೈಲಿಯಲ್ಲಿದೆ. ಈ ಕಟ್ಟಡಕ್ಕೆ ಎರಡು ಮಿನಾರುಗಳಿದ್ದು ಅವುಗಳ ಮೇಲೆ ಪಕ್ಷಿಗಳ, ಸಾಲು ಹಂಸಗಳ ಸೂಕ್ಷö್ಮ ಕೆತ್ತನೆಗಳಿವೆ. ಆನೆ ಮತ್ತು ಸಿಂಹದ ಕೆತ್ತನೆಗಳು ವಿಶಿಷ್ಟವಾಗಿವೆ. ಈ ಮಹಲನ್ನು ಕಟ್ಟಿಸಿದವ ಒಬ್ಬ ಸಫಾಯಿ ಕರ್ಮಚಾರಿ. ಕಸಗುಡಿಸುವವರನ್ನು ಮೆಹ್ತರ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ವಿಜಯಪುರವನ್ನು ಆಳುತ್ತಿದ್ದ ಮೊದಲನೆ ಇಬ್ರಾಹಿಂ ಆದಿಲ್ ಶಾಹಿ ಆತನಿಗೆ ಉಡುಗೊರೆಯಾಗಿ ಕೊಡುತ್ತಿದ್ದ ಚಿನ್ನದ ನಾಣ್ಯಗಳನ್ನು ಕೂಡಿಸಿಟ್ಟು ಈ ಮಹಲನ್ನು ಕಟ್ಟಿಸಿದನೆಂದು ಹೇಳಲಾಗುತ್ತದೆ. ಔರಂಗಜೇಬನು ವಿಜಯಪುರವನ್ನು ಆಕ್ರಮಣ ಮಾಡಿದ ನಂತರದಲ್ಲಿ ಈ ಕಟ್ಟಡವು ಪ್ರಾಮುಖ್ಯತೆಯನ್ನು ಕಳೆದುಕೊಂಡಿತು.
ಹುಡುಕಿ ಹೆಕ್ಕಿದರೆ ಮಿನುಗುವ ಮಿಣುಕುಗಳು ಭಾರತದ ಇತಿಹಾಸಕ್ಕೆ ಹೊಸ ಮೆರಗು ನೀಡಬಲ್ಲವು.

