ಬೌದ್ಧಗುರು ಸುನೀತ

ಗಂಗಾನದಿ ತವ ವಂದಪ ಬುದ್ದ ಸಿಸ್ಯರೊಂದ್ಗೆ ಬಿಕ್ಸೆಗೆ ವೋಗಿದ್ದ. ದಾರಿನಾಗ ವೋಯ್ತ ಇದ್ದ ಮಲ ಹೊರೊ ಸುನೀತ ಬುದ್ದನ್ನ ಕಂಡು ಅಂಗೆ ಇಂದ್ಕೆ ರ‍್ಕಂಡ. ಆದ್ರೂ ಬುದ್ದ ಅವನ್ತಕೆ ವೋದ. ಮೈಯಿ, ಬಟ್ಟೆ ಎಲ್ಲ ನರ‍್ತ ಇದ್ದ ಸುನೀತ ಗಾಬ್ರಿ ಬಿದ್ದು ನೀರೊಳ್ಗೆ ವೋಗಿ ಕುತ್ಕಂಡ.
ಬುದ್ದ: ಬಾಸಾಮಿ ನಿಂತಾವಸಿ ಮಾತಾಡ್ಬೇಕು.
ಸುನೀತ: ಅಯ್ಯೊ ದೂರ ವೊಗಿ ಸಾಮಿ ನನ್ನ ಮುಟ್ಸ÷್ಕಂಡ್ರೆ ನೀವು ಗಲೀಜಾತಿರಾ.
ಬುದ್ದ: ನಮ್ನ ಗಲೀಜ್ ಮಾಡೋದು ದುರಾಸೆ, ದ್ವೇಷ, ಮೋಹ. ನೀನು ಸುದ್ವಾಗಿದಿಯಾ ಏನು ನಿನ್ನ ಎಸ್ರು?
ಸುನೀತ: ಸುನ್ತಾ ಅಂತರೆ ಸಾಮಿ.
ಬುದ್ದ: ದೀಕ್ಸೆತಾಂಡು ಬಿಕ್ಸು ಆಗು.
ಸುನೀತ: ಅದೆಂಗಾದಾತು ನಾನು ಕೀಳ್ ಜಾತಿಯೋನು.
ಬುದ್ದ: ಎಲ್ಲಾರ್ ಕಣ್ಣೀರ್ ಉಪ್ಪೆ! ಅರಿವಿನ್ದಾರಿನಾಗೆ ಜಾತಿ ಧರ್ಮ ಇಲ್ಲ.
ಸುನೀತ: ಏಲ್ಬಾಚೊ ನನ್ನ ಎಲ್ರೂ ಏಲ್ನಂಗೆ ಅಸಿಸಿ ಮಾಡ್ತರೆ. ಇಂಗೆ ಯಾರು ನಂತವ ಮಾತಾಡರ‍್ಲಿಲ್ಲ ದೀಕ್ಸೆ ಕೊಟ್ರೆ ಜೀವಾ ಮುಡ್ಪಾಗಿಡ್ತೀನಿ.
ಬುದ್ದ: ಸುನೀತನ ಮೈದಡವಿ ತಲೆ ಬೋಳ್ಸಿ, ಮೈ ತಿಕ್ಕಿ ತೊಳ್ದು ರ‍್ಕೊಂಡೋಗಿ ದೀಕ್ಸೆ ಕೊಟ್ಟ. ಈ ಸಂಗ್ತಿ ಕೇಳಿದ ದರುಮ್‌ಗರ‍್ಗೋಳೆಲ್ಲ ದೊರೆಗೆ ದೂರು ಕೊಟ್ರು. ಕೇಳಕೆ ಅಂತ ದೊರೆ ಬುದ್ದನತ್ರ ಬಂದ. ಆಸ್ರಮದೊಳ್ಗೆ ವೊಗೊವಾಗ ಸಣ್‌ದೊಂದು ಬಂಡೆ ಮ್ಯಾಲೆ ಬಿಕ್ಸು ಒಬ್ಬ ಕುತ್ಕಂಡ ಉಪ್ದೇಸ ಕೊಡ್ತ ಇದ್ದ. ಅವ್ನ ಕಣ್ಣಿನ್ ದೀಪ್ದಾಗೆ ಅವ್ನ ಮಕ ವಳಿತಿತ್ತು. ಅವ್ನಾಡೊ ಮಾತ್ನ ಸಿಲೆ ಅಂಗೆ ಕುಂತು ಕೇಳ್ತ ಇದ್ದೋರ ಮಕ್ದಾಗೆ ಸಾಂತಿ ಅಡ್ಕಂಡಿತ್ತು. ರಾಜಂಗು ಅಲ್ಲೆ ಕುಂತು ಕೇಳ್ಬೇಕು ಅನ್ಸ್ತು. ಬುದ್ದನ್ನ ನೊಡ್ಬೇಕಲ್ಲ ಅಂತ ವೋಗಿ ಏನು ಎತ್ತ ಅಂತ ಯಿಚರ‍್ಸಿ ಅಲ್ಲಿ ಕುಂತಿರೊ ಬಿಕ್ಸು ಯಾರು ಅಂತ ಕೇಳ್ದ.
ಬುದ್ದ: ಅವ್ನು ಸುನೀತ, ಸ್ಯಾನೆ ಜಾಣ, ಪ್ರಾಮಣಿಕ ಬಂದ್ ಮೂರ್ ತಿಂಗ್ಳಾಗೆ ದೊಡ್ಡ ಸಾದ್ನೆ ಮಾಡಿ ಬೋದ್ನೆ ಮಾಡಂಗೆ ಆಗವ್ನೆ ಅಂದ.
ರಾಜ: ದೂರು ಕೊಟ್ಟಿದ್ರೆ ಅಪರಾದ್ವಾಗ್ತಿಲ್ಲ ಅಂದ್ಕಂಡು ‘ಯರ‍್ನೂ ಬೇದ ಮಾಡ್ದಿರೊ ನಿನ್ನ ಅಂತರ‍್ಣಕ್ಕೆ ಎಣೆನೇ ಇಲ್ವಲ್ಲಪ್ಪ, ನಿನ್ನ ಮಾರ್ಗ ಎಂತ ಅದ್ಬುತವಪ್ಪ’ ಅಂತ ಕೈ ಎತ್ತಿ ಮುಗ್ದ.
ಬುದ್ದ: ರ‍್ವಿನ ದಾರಿನಾಗೆ ಜಾತಿಬೇದ ಇಲ್ಲ. ಎಲ್ಲರೂ ವಂದೆ, ಎಲ್ಲರ ರಕ್ತ ಕೆಂಪು, ಎಲ್ರ ಬೆವ್ರು ಉಪ್ಪೇ, ಎಲ್ಲರ ವಳ್ಗೂ ಅರಿವಿನ ದಾರಿ ಕಂಡ್ಕಳ ಬೆಳಕದೆ. ಸುನೀತನ ವಳ್ಗಿರೊ ಬೆಳ್ಕು ನಂಗೆ ಅವತ್ತೇ ಕಾಣ್ತು. ಅದ್ಕೆ ಸುನೀತನ್ನ ರ‍್ಕಂಡು ಬಂದೆ; ನೀನು ಇವತ್ತು ಕಂಡ್ಕಂಡೆ. ಕಾಣ್ದಿರೋರು ದರ‍್ಲಿ, ಕಂಡೋರು ರ‍್ಲಿ.
ಮನ್ನೆ ದಿನ ಕೆಜೆಪ್‌ನಾಗೆ ಒಂದೇಸಲ್ಕೆ ಮರ‍್ಜನ ಕಕ್ಕಸ್ ಗುಂಡಿನಾಗೆ ಬಿದ್ ಸತ್ತೋದ್ರು. ಆಗೆಲ್ಲ ಏಲ್ನ ಕೈಯಾಗೆ ಬಾಚುಸ್ತಿದ್ರು ಈಗ ಏಲ್ನಾಗೆ ಈಜಾಡ್ಸಿ ಉಸ್ರುಗಟ್ಟಿ ಸಾಯ್ರಿ ಅಂತರೆ. ಗೊಬ್ರುದಾಗಿರೋ ಊವ ಊವ್ನಾಗಿರೊ ಗೊಬ್ರ ಕಂಡೋರಿಗೆ ಎಲ್ಡೂ ವಂದೇ ಅಂತ ಗೊತ್ತಾತದೆ. ಊವಿಲ್ದೆ ಗೊಬ್ರಿಲ್ಲ, ಗೊಬ್ರಿಲ್ದೆ ಊವಿಲ್ಲ ಅಂತ ಗೊಬ್ರಊವಿನ ಸಂಬಂಧ ಕತ್ರಿಸಾಕ್ದೊರ‍್ಗೆ ಊವ ಬೇರೆ ಗೊಬ್ರ ಬೇರೆ. ಅಂತರ‍್ಗೆಲ್ಲ ಅವ್ರ ಏಲೆ ಅವ್ರಿಗೆ ಅಸಯ್ಯ; ಅವರೇಲು ಬಾಚೊರು ಅಸಯ್ಯ; ಇನ್ನ ಅವರೊಳ್ಗಿರೊ ಅರಿವಿನ ಬೆಳ್ಕು ಕಾಣ್ಸದುಂಟಾ? (ಕೃಪೆ: ದು.ಸರಸ್ವತಿಯವರ ಸಣ್ತಿಮ್ಮಿ ಪುರಾಣ ಆರು ಏಕಾಂಕಗಳು ಪ್ರ:ಕವಿ ಪ್ರಕಾಶನ, ಕವಲಕ್ಕಿ, ಉ.ಕ.ಜಿಲ್ಲೆ, ೨೦೧೮)