ಭಾರತ ಸ್ವಾತಂತ್ರ್ಯದ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಕರೆ

ಜವರಹರಲಾಲ್ ನೆಹರು ಅವರಿಗೆ ಅಂಬೇಡ್ಕರ್ ಅವರು ೧೮ ಡಿಸೆಂಬರ್ ೧೯೪೭ರಲ್ಲಿ ಬರೆದ ಪತ್ರದಲ್ಲಿ, ಪಾಕಿಸ್ತಾನವು ನರ‍್ಮಲ್ಯ ಕೆಲಸದಲ್ಲಿ ತೊಡಗಿರುವವರನ್ನು ಭಾರತಕ್ಕೆ ಹೋಗಲು ಬಿಡುತ್ತಿಲ್ಲ ಎಂಬ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ಕುರಿತು ಅಂಬೇಡ್ಕರ್ ಹೀಗೆ ಉಲ್ಲೇಖಿಸಿದ್ದಾರೆ:

“ಪಾಕಿಸ್ತಾನ ರ‍್ಕಾರವು ತಮ್ಮ ಪ್ರದೇಶದಿಂದ ಪರಿಶಿಷ್ಟ ಜಾತಿಗಳ ಒಕ್ಕುಲೆಬ್ಬಿಸುವುದನ್ನು ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ನನಗನಿಸುವ ಪ್ರಕಾರ ಇದರ ಹಿಂದಿರುವ ಕಾರಣ, ಭೂಒಡೆತನ ಹೊಂದಿರುವ ಜನರಿಗೆ ಕೀಳು ಕೆಲಸ ಮಾಡಿಕೊಂಡು ಭೂಹೀನ ಕೂಲಿಗಳಾಗಿ ಸೇವೆ ಸಲ್ಲಿಸುವ ಸಲುವಾಗಿ ಪರಿಶಿಷ್ಟ ಜಾತಿಗಳು ಪಾಕಿಸ್ತಾನದಲ್ಲಿ ಉಳಿದುಕೊಳ್ಳಬೇಕು ಎಂಬುದಾಗಿದೆ. ಗುಡಿಸುವವರನ್ನು ಅಗತ್ಯ ಸೇವೆಗಳಿಗೆ ಸೇರಿದವರೆಂದು ಮತ್ತು ಒಂದು ತಿಂಗಳ ನೋಟೀಸ್ ನೀಡದೆ ಬಿಡುಗಡೆ ಮಾಡಲಾಗದೆಂದು ಘೋಷಿಸುವ ಮೂಲಕ ಅವರನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ರ‍್ಕಾರ ಚಿಂತಿಸುತ್ತದೆ.”